ವಿಮರ್ಶಕನಾಗಿ ನಾಯಕ

ಬಿಟ್ಟರಾಯ್ತೆ ದಾಡಿ
ತಲೇಲಿರೋದು ರಾಡಿ
ಕವಿಯಂತೆ ಕವಿ
ಬೀದಿ ಸುತ್ತೋ ರೌಡಿ

ಎಂಥ ಕವಿ! ಎಂಥ ಕವಿ!
ಹಿಂಡಿರವನ ಕಿವಿ!

ಪದ್ಯವಂತೆ ಪದ್ಯ
ಬರಿಯೋದು ಬರೀ ಗದ್ಯ
ಮತ್ತಿನ್ನೇನು ಮಾಡ್ತಾನಪೋ
ತಲೆಗೇರಿದರೆ ಮದ್ಯ

ಎಂಥ ಪದ್ಯ! ಎಂಥ ಪದ್ಯ!
ನಾಚಿಕೆನಾದ್ರೂ ಇದ್ಯ!

ನಾಯಿ ಬೆಕ್ಕು ಇಲಿ ಮತ್ತು
ಪೆಂಟಯ್ಯನ ಬೇಸ್ತು
ಬರೀತಾರೇನ್ರಿ ಯಾವನೆ ಆದ್ರು
ಇವತ್ತು ಇಂಥ ವಸ್ತು

ಎಂಥ ವಸ್ತು! ಎಂಥ ವಸ್ತು!
ಹಿಸುಕಿರವನ ಕತ್ತು!

ಹೊಸ ಸಾರಿಗೆ ಹೊಸ ಕೋಳಿ
ಬೇಕೊ ಬೇಡವೊ ನೀವೆ ಹೇಳಿ
ಬೇಕಾದರೆ ಇವನ ತಳಿ
ಹೂಡಿ ನಮ್ಮ ಚಳುವಳಿ

ಎಂಥ ಕೋಳಿ! ಎಂಥ ಕೋಳಿ!
ಇದರ ಕೂಗು ಕೇಳಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕುಸಿತ ತಡೆದ ಮಹಾತ್ಮ ಪಿಕ್ಚರ್‍ಸ್
Next post ತೆರಿಗೆ ಮತ್ತು ತೇರು

ಸಣ್ಣ ಕತೆ

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

cheap jordans|wholesale air max|wholesale jordans|wholesale jewelry|wholesale jerseys